- ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ತೊರೆದು ಹೋಗದಿರು ಜೋಗಿ ಅಡಿಗೆರಗಿದ ಈ ದೀನಳ ಮರೆತು
ಸಾಗುವೆ ಏಕೆ ವಿರಾಗಿ ? ||
ಪ್ರೇಮ ಹೋಮದ ಪರಿಮಳ ಪಥದಲಿ
ಸಲಿಸು ದೀಕ್ಷೆ ಎನಗೆ
ನಿನ್ನ ವಿರಹದಲಿ ಉರಿದು ಹೋಗಲು
ಸಿಧ್ಧಳಿರುವ ನನಗೆ
ಉದುವೆ ಗಂಧದ ಚಿತೆಯ
ನಡುವೆ ನಿಲುವೆ ನಾನೇ
ಉರಿ ಸೋಕಿಸು ಪ್ರಭುವೇ
ಚಿತೆಗೆ ಪ್ರೀತಿಯಿಂದ ನೀನೆ
ಉರಿದು ಉಳಿವೆನು ಬೂದಿಯಲಿ
ಲೇಪಿಸಿಕೋ ಅದ ಮೈಗೆ
ಮೀರಾ ಪ್ರಭು ಗಿರಿಧರನೆ
ಜ್ಯೋತಿಯು ಜ್ಯೋತಿಯ ಸೇರಲಿ ಹೀಗೆ
Video link:
http://www.youtube.com/watch?v=N7sf2C5iiRs
English lyrics:
http://www.madhurabhavageethegalu.blogspot.com/2012/08/toredu-hogadiru.html
No comments:
Post a Comment
Note: Only a member of this blog may post a comment.