ಯಾವ ಕವಿಯು ಬರೆಯಲಾರ...

- ಚಿ. ಉದಯಶಂಕರ್
ಯಾವ ಕವಿಯು ಬರೆಯಲಾರ ಒಲವಿನಿಂದ ಕಣ್ ನೋಟದಿಂದ
ಹೃದಯದಲ್ಲಿ ನೀ ಬರೆದ ಈ ಪ್ರೇಮ ಗೀತೆಯ ||

ನಿನ್ನ ಕವಿತೆ ಎಂಥ ಕವಿತೆ ರಸಿಕರಾಡೊ ನುಡಿಗಳಂತೆ
ಮಲ್ಲೆ ಹೂವು ಅರಳಿದಂತೆ ಚಂದ್ರ ಕಾಂತಿ ಚೆಲ್ಲಿದಂತೆ
ಜೀವ ಜೀವ ಅರೆತು ಬೆರೆತು ಸುಖವ ಕಾಣುವಂತೆ

ಪ್ರೇಮ ಸುಮವು ಅರಳುವಂತೆ ಪ್ರಣಯ ಗಂಧ ಚೆಲ್ಲುವಂತೆ
ಕಣ್ಗಳೆರೆಡು ದುಂಬಿಯಂತೆ ಬ್ರಮರ ಗೀತೆ ಹಾಡುವಂತೆ
ಜೇನಿಗಾಗಿ ತುಟಿಗಳೆರೆಡು ಸನಿಹ ಸೇರುವಂತೆ

Video link:
http://www.youtube.com/watch?v=acHo9ZDGCoI   
English lyrics:
http://www.madhurabhavageethegalu.blogspot.com/2012/07/yaava-kaviyu-bareyalaara.html

No comments:

Post a Comment

Note: Only a member of this blog may post a comment.